Posts

Showing posts from May, 2022

ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ !

Image
Link :  https://photos.app.goo.gl/uRmjt9jXziaiT2Jz5 ಕ್ರಿ. ಶ. ೧೬೨೦ ರಲ್ಲಿ ಶ್ರೀ. ತಿಮ್ಮಪ್ಪನವರು ಶ್ರೀ. ನೀಲಕಂಠೇಶ್ವರ ದೇವಾಲಯ ಹಾಗೂ ಕಲ್ಯಾಣಿಯನ್ನು ಕಟ್ಟಿಸಿದರು.   ಬಹಳ ವರ್ಷಗಳ ಹೊಳಲ್ಕೆರೆ ನಿವಾಸಿಗಳ ಬಾಯಾರಿಕೆಯ ಫಲವಾಗಿ, ಶ್ರೀ ನಟರಾಜ್ ಜಮದಗ್ನಿಯವರ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಮತ್ತು ನೇತೃತ್ವದಿಂದಾಗಿ ೨೦೨೨ ರ ಮೇ ೨೩ ಸೋಮವಾರದಂದು ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯ, ಸಾಂಗವಾಗಿ ನೆರವೇರಲಿದೆ.  ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ ೨೩, ಮೇ ಸೋಮವಾರ,  ೨೦೨೨ ರಿಂದ ೨೫, ಮೇ ೨೦೨೨ ರ ಬುಧವಾರದವರೆವಿಗೆ  ಪರಮಪೂಜ್ಯ ಸ್ವಾಮಿಗಳ  ದಿವ್ಯ ಸಾನ್ನಿಧ್ಯ, ಹಾಗೂ ನೇತೃತ್ವದಲ್ಲಿ  ಪೂಜಿಸಲ್ಪಟ್ಟು ಜರುಗಲಿದೆ.   ವಿವರಗಳು ಆಹ್ವಾನ ಪತ್ರಿಕೆಯಲ್ಲಿ ಕೊಡಲ್ಪಟ್ಟಿದೆ. ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ನೀಲಕಂಠೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ.  -ಶ್ರೀ ನಟರಾಜ್, ಕಾರ್ಯನಿರ್ವಾಹಕರು. ಶ್ರೀನೀಲಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯಕಾರಿ ಸಮಿತಿ, ಹೊಳಲ್ಕೆರೆ