Posts

Showing posts from April, 2008

’ ಹೂಸ್ಟನ್ ಕನ್ನಡ ವೃಂದ ’, ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿತು !

Image
ಹೂಸ್ಟನ್ ಕನ್ನಡ ವೃಂದದವರು, ೨೦೦೮ ರ ಯುಗಾದಿಯ ದಿನ ತಮ್ಮ ಸಂಘದ ’ ಬೆಳ್ಳಿಹಬ್ಬ” ವನ್ನು ಆಚರಿಸಿದರು. ಆ ದಿನ ಕನ್ನಡ ಮಕ್ಕಳೆಲ್ಲಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮನರಂಜನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರೇಕ್ಷಕರ ಮನಸೂರೆಗೊಂಡರು. ಆ ದಿನದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಪ್ರೊ. ಹೆಚ್. ಆರ್. ಚಂದ್ರಶೇಖರ್ ರವರು, ಬರೆದು ಪ್ರಸ್ತುತಪಡಿಸಿದ, " ಕರ್ಣಾಟಕ ಭಾಗವತ " ದ ಎರಡು ಸಂಪುಟಗಳ ಬಿಡುಗಡೆಯ ಸಮಾರಂಭ ! ಈ ಎರಡು ಪುಸ್ತಕಗಳು ಅತ್ಯಂತ ಸಮಯೋಚಿತವಾಗಿಯೂ ಹಾಗೂ ಕರ್ಣಾಟಕದ ಭಾಗವತದ ರಚನೆಕಾರರ ಸಮಗ್ರ ಕೆಲಸಗಳ ಪಟ್ಟಿಯನ್ನು ಕಲೆಹಾಕಿ, ಅದರಲ್ಲಿ ಮತ್ತೂ ಮುಂದೆಹೋಗಿ ಸಂಶೋಧನೆಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಉತ್ತೇಜಿಸುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ, ಇನ್ನೇನು ಮುರಿದು ಪುಡಿ-ಪುಡಿಯಾಗುವ ಸ್ಥಿತಿಯಲ್ಲಿದ್ದ " ತಾಳೆಗರಿಗಳ, ಜ್ಞಾನ ಭಂಡಾರ " ವನ್ನು ರಕ್ಷಿಸಿ ಪೋಶಿಸಿಕೊಂಡುಬಂದ ಬಗೆ ಅನನ್ಯವಾಗಿದೆ. ಮೂಲದಲ್ಲಿ ಮೇಲಿನಕೃತಿಯನ್ನು ತಾಳೆಯಗರಿಯಮೇಲೆ ಮೂಡಿಸಿದವರು, ಶ್ರೀ. ರಾಮಣ್ಣಯ್ಯನವರು. ಅದನ್ನು ಸಂಗ್ರಹಿಸಿ, ಲಿಪಿಕಾರರಾಗಿ, ಸಂಪಾದಕರಾಗಿ, ಹಾಗೂ ಸಂಶೋಧಕರಾಗಿ, ಡಾ. ಚಂದ್ರರವರು ತಮ್ಮ ಪಾತ್ರವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಈ ಗ್ರಂಥದ ನಿರ್ವಹಣಾ ಸಮಿತಿಯೂ ಅಷ್ಟೇ ಜವಾಬ್ದಾರಿಯಿಂದ ತನ್ನ ಕೆಲಸವನ್ನು ನಿರ್ವಹಿಸಿ ಸಹಕರಿಸಿದೆ. ಭೌತಶ

" ಕರ್ಣಾಟಕ ಭಾಗವತ " ಇನ್ನೇನು ಸದ್ಯದಲ್ಲೇ ಹೊರಬಲಿದೆ !

Image
ಈ ಪುಸ್ತಕದ ಪ್ರಕಟಣೆಯ ಹೊರೆಯನ್ನು ಚಂದ್ರಶೇಖರ್ ಜೊತೆಗೆ, ಮತ್ತೂ ಹಲವರು, ತಮ್ಮ ಅಮೂಲ್ಯಸಮಯವನ್ನು ಬದಿಗಿಟ್ಟು ಸಹಕರಿಸಿದ್ದಾರೆ. ಅವರಲ್ಲಿ ಪ್ರಮುಖರು, ಶ್ರೀ ರಾಮಕೃಷ್ಣರವರು. ಇವರು, ತಮ್ಮ ಕಾಲೇಜ್ ನ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ, ಪ್ರವೃತ್ತಿಯಿಂದಲ್ಲ. ಭಾಗವತದ ಪ್ರತಿಹಂತದಲ್ಲೂ ಸಹಕರಿಸಿ, ಅದರ ಸಂಪಾದನೆಯಲ್ಲೂ ಯೋಗದಾನಮಾಡಿದ್ದಾರೆ. ಇದಕ್ಕಾಗಿಯೇ ನಿರ್ಮಿಸಿದ್ದ ಸಮಿತಿಯ ಸದಸ್ಯರೆಲ್ಲಾ ತಮ್ಮ ಅಮೂಲ್ಯ ಕಾಣಿಕೆಯನ್ನು ಕೊಟ್ಟಿದ್ದಾರೆ. ಇಂತಹ ಗ್ರಂಥದ ಎರಡು ಸಂಪುಟಗಳ ಪ್ರತಿಗಳನ್ನು ಅಮೆರಿಕ ಸಂಯುಕ್ತಸಂಸ್ಥಾನದ ಹೂಸ್ಟನ್ ನಗರದ ಕನ್ನಡ ವೃಂದದವರು, ಹಮ್ಮಿಕೊಂಡಿರುವ ತಮ್ಮ ಬೆಳ್ಳಿಹಬ್ಬದ ಆಚರಣೆಯ ಸಮಾರಂಭದ ಶುಭ ಅವಸರದಲ್ಲಿ ಬಿಡುಗಡೆಮಾಡಲಾಗುತ್ತಿದೆ. ಸುಂಕದ ಪರಿವಾರದವರಿಗೆಲ್ಲಾ, ಇದೊಂದು " ಅವಿಸ್ಮರಣೀಯ ದಿನ," ವೆಂದರೆ ತಪ್ಪಲ್ಲ !